ಆಣೆ ಶಬ್ದದ ಇತರ ಬಳಕೆಗಳಿಗಾಗಿ ಆಣೆ (ದ್ವಂದ್ವ ನಿವಾರಣೆ) ನೋಡಿ.

ವ್ಯಾಖ್ಯಾನ

ಬದಲಾಯಿಸಿ

ಆಣೆ ಎಂದರೆ ಪ್ರಮಾಣವಚನ, ಸತ್ಯವೆಂದು ಒಬ್ಬನು ಕೊಟ್ಟ ಹೇಳಿಕೆ. ಈ ಹೇಳಿಕೆಯನ್ನು ದೇವರ ಮುಂದೆ ಕೊಡಬಹುದು. ಇಲ್ಲವೆ ಲೌಕಿಕವಾದ ನ್ಯಾಯಾಲಯದಲ್ಲಿ ನ್ಯಾಯಾಧೀಶನ ಮುಂದೆ ಕೊಡಬಹುದು. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮತೀಯ ಸನ್ನಿವೇಶದಲ್ಲಿ ಕೊಟ್ಟ ಹೇಳಿಕೆಯಾಗಿರುತ್ತಿತ್ತು.ಭಾರತದಲ್ಲಿ ದೇವಸ್ಥಾನದಲ್ಲಿ ದೇವರ ಸಮ್ಮುಖದಲ್ಲಿ ಪ್ರಮಾಣ ಮಾಡಿ ಹೇಳಿಕೆಕೊಡುವುದು ರೂಢಿಯಲ್ಲಿತ್ತು.ಪಾಶ್ಚಾತ್ಯ ದೇಶಗಳಲ್ಲಿ ಕ್ರೈಸ್ತಮಠಾಧಿಪತಿಯ ಮುಂದೆ ಪ್ರಮಾಣ ಮಾಡುವುದು ರೂಢಿಯಲ್ಲಿತ್ತು. ಪ್ರಮಾಣ ಮಾಡಲು ದೇವಸ್ಥಾನಕ್ಕೆ ಅಗತ್ಯವಾಗಿ ಹೋಗಬೇಕಾಗಿರಲಿಲ್ಲ. ಸೂರ್ಯಚಂದ್ರಾದಿಗಳ ಮುಂದೆ, ಬಹಿರಂಗವಾಗಿ ಎಲ್ಲರ ಮುಂದೆ ಪ್ರಮಾಣ ಮಾಡುವ ಸಂಪ್ರದಾಯವೂ ಆಚರಣೆಯಲ್ಲಿತ್ತು.

ಆಣೆ ಸೂಚಿಸುವ ಅಂಶ

ಬದಲಾಯಿಸಿ

ಸಂದಿಗ್ಧವಾದ ಲೌಕಿಕವ್ಯವಹಾರಗಳ ವ್ಯಾಜ್ಯಗಳಲ್ಲಿ ವಾದಿಯೋ ಪ್ರತಿವಾದಿಯೋ ಮತ ಗ್ರಂಥವನ್ನು ಕೈಲಿ ಹಿಡಿದೋ ದೇವರ ಹೆಸರು ಹೇಳಿಯೋ ಪ್ರಮಾಣ ಮಾಡಿದಾಗ ಅದರ ಆಧಾರದ ಮೇಲೆ ವ್ಯಾಜ್ಯವನ್ನು ಇಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳು ಪರಿಹರಿಸುತ್ತಿದ್ದುದಕ್ಕೆ ಚರಿತ್ರೆಯಲ್ಲಿ ನಿದರ್ಶನಗಳಿವೆ. ದೈವ, ಮತವಿಚಾರದಲ್ಲಿ ಭಯಭೀತಿ ಇರುವ ತನಕ ಇದು ಒಳ್ಳೆಯ ಮಾರ್ಗವೇ ಆಗಿತ್ತು. ಕೊಟ್ಟ ಮಾತಿಗೆ ತಪ್ಪಬಾರದು, ಅಸತ್ಯವನ್ನು ನುಡಿಯಬಾರದು, ಅನ್ಯಾಯವನ್ನು ಮಾಡಬಾರದು ಎಂಬ ನೈತಿಕ ಭಾವನೆಗಳು ಆಣೆಯ ಹಿಂದೆ ಇದ್ದಂತೆ ತೋರುತ್ತದೆ. ಸೂರ್ಯಚಂದ್ರಾದಿಗಳ ಮುಂದೆ ಪ್ರಮಾಣ ಮಾಡುವುದು ತೊಂಬ ಆರ್ಷೇಪದ್ಧತಿ. ಬೇರೆ ಬೇರೆ ದೇಶಗಳ ಅನಾಗರಿಕ ಸಮಾಜಗಳಲ್ಲೂ ಈ ಪದ್ಧತಿ ರೂಢಿಯಲ್ಲಿದೆ.

ಉಲ್ಲೇಖಗಳು

ಬದಲಾಯಿಸಿ

[೧]

  1. http://jodihakkigalu.blogspot.in/2014/05/promise.html
"https:https://www.how.com.vn/wiki/index.php?lang=kn&q=ಆಣೆ&oldid=1148292" ಇಂದ ಪಡೆಯಲ್ಪಟ್ಟಿದೆ
🔥 Top keywords: ಮುಖ್ಯ ಪುಟದರ್ಶನ್ ತೂಗುದೀಪ್ಕುವೆಂಪುಸಹಾಯ:ಲಿಪ್ಯಂತರವಿಶೇಷ:Searchರಾಷ್ಟ್ರೀಯ ಸೇವಾ ಯೋಜನೆಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಕನ್ನಡದ.ರಾ.ಬೇಂದ್ರೆಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಬಸವೇಶ್ವರಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಾಹಿತ್ಯಕನ್ನಡ ಸಂಧಿಚೇ ಗುವಾರತತ್ಸಮ-ತದ್ಭವಕರ್ನಾಟಕಪೂರ್ಣಚಂದ್ರ ತೇಜಸ್ವಿವಚನಕಾರರ ಅಂಕಿತ ನಾಮಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಗುಣಿತಾಕ್ಷರಗಳುಜಲ ಮಾಲಿನ್ಯಮಹಾತ್ಮ ಗಾಂಧಿಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಅಂಗವಿಕಲತೆಚಂದ್ರಶೇಖರ ಕಂಬಾರಮೊಸಳೆಗಿರೀಶ್ ಕಾರ್ನಾಡ್