ಅಲೆಕ್ಸಾಂದ್ರಿ ವ್ಯಸಿಲಿ

ಅಲೆಕ್ಸಾಂದ್ರಿ ವ್ಯಸಿಲಿ 1821-90 ರೊಮೇನಿಯದ ಕವಿ ಮತ್ತು ನಾಟಕಕಾರ. ಪ್ಯಾರಿಸ್‌ನಲ್ಲಿ ವೈದ್ಯಶಾಸ್ತ್ರ ಮತ್ತು ನ್ಯಾಯಶಾಸ್ತ್ರಗಳನ್ನು ಅಭ್ಯಾಸಮಾಡಿದ. ಎರಡನ್ನೂ ತ್ಯಜಿಸಿ ಸಾಹಿತ್ಯಕ್ಕೆ ಮುಡಿಪಾದ. ಇಟಲಿ ಎಂದರೆ ಪ್ರಾಣ. ಆಧುನಿಕ ರೊಮೇನಿಯದ ಸಾಹಿತ್ಯದಲ್ಲಿ ಇವನದು ಹಿರಿಯ ಸ್ಥಾನ. ಇವನು ಯವನ ಪಂಥಕ್ಕೆ ಸೇರಿದವ. 1844-71ರವರೆಗೆ ಲಘು ದುರಂತನಾಟಕಗಳು, ಹಾಸ್ಯನಾಟಕಗಳು, ಪ್ರಹಸನಗಳು, ಏಕಾಂಕನಾಟಕಗಳು ಮತ್ತು ಗೀತನಾಟಕಗಳನ್ನು ಬರೆದ. ಅನಂತರ ಬರೆದ ನಾಟಕಗಳು ಹೆಚ್ಚು ಕಲಾತ್ಮಕವಾಗಿವೆ. ಇವುಗಳಲ್ಲಿ ಡೆಸ್ಪಾಟ್ ವೋಡಾ (1879), ಫಾಂತಾನಾ ಬ್ಲಾಂಡಿಸಿ (1883), ಒವೀಡಿಯಾ (1885)-ಇವು ಪ್ರಸಿದ್ಧ ಕೃತಿಗಳು. ಫ್ರಾನ್ಸ್‌ನ ಸಾಹಿತ್ಯದ ಪ್ರಭಾವವನ್ನು ಇವುಗಳಲ್ಲಿ ಕಾಣಬಹುದು. ಒಟ್ಟು ಮುನ್ನೂರಕ್ಕೂ ಹೆಚ್ಚು ಕವನಗಳನ್ನೂ ಜಾನಪದ ಗೀತೆಗಳನ್ನೂ ಸಂಪಾದಿಸಿದ. ಇವನ ಕೃತಿಗಳಲ್ಲಿ ಗಹನತೆ ಇಲ್ಲದಿದ್ದರೂ ಉಜ್ಜ್ವಲತೆ ಉಂಟು. ಕವನಗಳಲ್ಲಿ ಲಾಲಿತ್ಯ, ಮಾಧುರ್ಯಗಳುಂಟು. ಇವನ ಗ್ರಾಮಜೀವನ ಕವನಗಳೂ ರಾಷ್ಟ್ರೀಯ ಐಕಮತ್ಯದ ಮಹತ್ತ್ವವನ್ನು ಮತ್ತೆ ಘೋಷಿಸಿದ ಕೃತಿಗಳೂ ರೊಮೇನಿಯದ ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಇವನಿಗೆ ಹಿರಿಯ ಸ್ಥಾನ ಗಳಿಸಿಕೊಟ್ಟಿವೆ.

ಅಲೆಕ್ಸಾಂದ್ರಿ ವ್ಯಸಿಲಿ
ಜನನ21 July 1821
ಮರಣ22 August 1890 (aged 69)
Mircești, Romania
ವೃತ್ತಿ(ಗಳು)Poet, playwright, politician, and diplomat
Signature
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
🔥 Top keywords: ಕನ್ನಡ ಅಕ್ಷರಮಾಲೆಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchವಿಶ್ವ ಪರಿಸರ ದಿನನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕನ್ನಡ ಗುಣಿತಾಕ್ಷರಗಳುಕರ್ನಾಟಕ ವಿಧಾನ ಪರಿಷತ್ದ.ರಾ.ಬೇಂದ್ರೆಶಿವರಾಮ ಕಾರಂತಬಸವೇಶ್ವರಕರ್ನಾಟಕದ ಜಿಲ್ಲೆಗಳುವರ್ಗೀಯ ವ್ಯಂಜನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಗೌತಮ ಬುದ್ಧಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡ ಸಂಧಿಭಾರತದ ಸಂವಿಧಾನಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಳೆಬಿಲ್ಲುಅಕ್ಕಮಹಾದೇವಿಕನ್ನಡ ವ್ಯಾಕರಣಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಾಹಿತ್ಯಜಿ.ಎಸ್.ಶಿವರುದ್ರಪ್ಪಗಿರೀಶ್ ಕಾರ್ನಾಡ್ವಿಭಕ್ತಿ ಪ್ರತ್ಯಯಗಳುಕರ್ನಾಟಕಯು.ಆರ್.ಅನಂತಮೂರ್ತಿವ್ಯಂಜನವಿಜಯನಗರ ಸಾಮ್ರಾಜ್ಯಲೋಕಸಭೆ