ಪಾರ್ಶ್ವವಾಯು


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪಾರ್ಶ್ವವಾಯು ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದ೦ತಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲ೦ಬಿತವಾಗಿರುತ್ತವಾದ್ದರಿಂದ ಎಲ್ಲಾ ಪೀಡಿತರಲ್ಲಿ ಒಂದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ.

ಆನಿಯಂತ್ರಿತವಾದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಗಳು ಪಾರ್ಶ್ವವಾಯು ಉಂಟಾಗಲು ಪ್ರಮುಖ ಕಾರಣ ಎನ್ನಲಾಗಿದೆ. ತಲೆಗೆ ಬಿದ್ದ ಪೆಟ್ಟಿನಿಂದಲೂ ಇದು ಬರುವ ಸಾಧ್ಯತೆ ಇದೆ.

ಮೆದುಳಿನ ಜೀವಕೋಶಗಳಿಗೆ 2 ರೀತಿಯಲ್ಲಿ ಹಾನಿಯುಂಟಾಗುವ ಸಂಭವವಿದೆ. ಒಂದು ಮೆದುಳಿಗೆ ರಕ್ತ ಪೂರೈಸುವ ನಾಳಗಳು ಕಟ್ಟಿಕೊಂಡು ರಕ್ತ ಸಂಚಾರ ಸ್ಥಗಿತಗೊಳ್ಳುವುದರಿಂದ ಮತ್ತೊಂದು ಮೆದುಳಿನ ರಕ್ತನಾಳಗಳು ಒಡೆದು ರಕ್ತ ಸೋರುವಿಕೆಯಾಗುವುದರಿಂದ. ಸಾಮಾನ್ಯವಾಗಿ ಮೆದುಳಿನ CT ಸ್ಕ್ಯಾನಿಂಗ ಮಾಡುವುದರಿಂದ ಅಲ್ಲಿ ಉಂಟಾಗಿರುವ ಹಾನಿಯ ರೀತಿ ಮತ್ತು ಪ್ರಮಾಣವನ್ನು ಕಂಡು ಹಿಡಿದು ಮುಂದಿನ ಉಪಚಾರವನ್ನು ನಿರ್ಧರಿಸಲಾಗುತ್ತದೆ.

ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿಂದ 4 ರಿಂದ 6 ಗಂಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸಂಪೂರ್ಣ ಗುಣಹೊಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ಪೀಡಿತರನ್ನು ಆದಷ್ಟು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವುದು ಬಹು ಮುಖ್ಯವಾದದ್ದು.

ಮೆದುಳಿನ ಜೀವಕೋಶಗಳಿಗುಂಟಾಗುವ ಹಾನಿ ಶಾಶ್ವತ ರೀತಿಯದ್ದಾಗಿರುವುದರಿಂದ ಸತ್ತ ಜೀವಕೋಶಗಳು ನಿರ್ವಹಿಸುತ್ತಿದ್ದ ಮೆದುಳಿನ ಕಾರ್ಯ ಕುಂಠಿತಗೊಳ್ಳುತ್ತದೆ ಅಥವಾ ಸ್ಥಗಿತ ಗೊಳ್ಳುತ್ತದೆ.

🔥 Top keywords: ಅಂತರಾಷ್ಟ್ರೀಯ ಯೋಗ ದಿನಮುಖ್ಯ ಪುಟಕುವೆಂಪುಯೋಗವಿಶೇಷ:Searchಸಹಾಯ:ಲಿಪ್ಯಂತರಯೋಗ ಮತ್ತು ಅಧ್ಯಾತ್ಮದಾಳಪಗಡೆಕನ್ನಡದರ್ಶನ್ ತೂಗುದೀಪ್ಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೌತಮ ಬುದ್ಧಗಾದೆಕನ್ನಡ ಅಕ್ಷರಮಾಲೆಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಭಾರತದ ಸಂವಿಧಾನಬಸವೇಶ್ವರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಪೂರ್ಣಚಂದ್ರ ತೇಜಸ್ವಿಕರ್ನಾಟಕನಳಂದಕುದುರೆಎ.ಪಿ.ಜೆ.ಅಬ್ದುಲ್ ಕಲಾಂಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ಕಂಬಾರಕನ್ನಡ ಗುಣಿತಾಕ್ಷರಗಳುಪಂಪಯು.ಆರ್.ಅನಂತಮೂರ್ತಿಕನ್ನಡ ಸಾಹಿತ್ಯ ಪ್ರಕಾರಗಳುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಕರ್ನಾಟಕದ ಇತಿಹಾಸ